ಅಧ್ಯಕ್ಷರ ಅನಿಸಿಕೆಗಳು
ಮಾನ್ಯರೇ,
ಕನ್ನಡದ ವರನಟ ಡಾ|| ರಾಜಕುಮಾರ, ಡಾ|| ವಿಷ್ಣುವರ್ಧನ್, ಶಂಕರನಾಗರಂತಹ ಕರ್ನಾಟಕದ ಇನ್ನೂ ಅನೇಕ ಮೇರು ನಟರ ನಟನಾ ಸಾಮರ್ಥ್ಯಕ್ಕೆ ಮನಸೋತು ಇವರಂತೆಯೇ ಇಲ್ಲಿಯೂ ಸಹ ಚಲನಚಿತ್ರ ರಂಗಕ್ಕೆ ತಮ್ಮ ಸೇವೆಯನ್ನು ಸಲ್ಲಿಸಲೆಂಬ ಮನೋಭಾವ ಹೊಂದಿರುವ ಇಲ್ಲಿನ ಅನೇಕ ಕಲಾವಿದರ ವಿಚಾರಗಳು ಸ್ತುತ್ಯಾಹ೯ವಾ.
ಉತ್ತರ ಕರ್ನಾಟಕದ ಅನೇಕ ಜಿಲ್ಲೇಗಳನ್ನೊಳಗೊಂಡ ಪ್ರದೇಶ, ನೆಲ, ಜಲ, ಇತಿಹಾಸ, ಸಾಹಿತ್ಯ, ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಉಡಿಗೆ-ತೊಡಿಗೆ, ಆಹಾರ ಪದ್ಧತಿ, ಹಬ್ಬ-ಹರಿದಿನಗಳನ್ನು ಅವಲೋಕಿಸಿದಾಗ ಕರ್ನಾಟಕದ ಉತ್ತರ ಭಾಗ ಸ್ವಲ್ಪ ಬಿನ್ನವಾಗಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಅದೇ ರೀತಿ ಕನ್ನಡ ನಾಡಿನ ಅನೇಕ ಸಾಹಿತಿಗಳು, ರಂಗಭೂಮಿಯ ಕಂಪನಿಗಳು, ನಾಟಕ ಕಲಾವಿದರು, ಸಂಗೀತ ಕ್ಷೇತ್ರದ ದಿಗ್ಗಜರು, ನೃತ್ಯ ಪಟುಗಳು ಹಾಗೂ ಎಲೆಮರೆಯ ಕಾಯಿಗಳಂತೆ ಸತತವಾಗಿ ಚಲನಚಿತ್ರ ಕ್ಷೇತ್ರದ ಏಳಿಗೆಗಾಗಿ ಮಾಡಿ ಮಾಡಿದವರು ಇನ್ನು ಅನೇಕರು ಇಲ್ಲಿಯವರೇ ಆಗಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಚಲನಚಿತ್ರಗಳ ಚಿತ್ರಿಕರಣಕ್ಕಾಗಿ ಅನೇಕ ಸುಂದರ ತಾಣಗಳು, ಉದ್ಯಾನಗಳು, ಕೋಟೆ-ಕೊತ್ತಲೆಗಳು, ನೈಸಗಿ೯ಕ ಸಂಪತ್ತುಗಳಾದ ಕಾಡು-ಮೇಡುಗಳು, ಸಮುದ್ರದ ತೀರಗಳು ಇನ್ನೂ ಅನೇಕ ಸುಂದರವಾದ ಪ್ರೇಕ್ಷಣಿಯ ತಾಣಗಳು ಅತಿ ಸನಿಹದಲ್ಲಿ ಇರುವದರಿಂದ ಚಲನಚಿತ್ರ ನಿರ್ಮಾಣಕ್ಕಾಗಿ ಯೋಗ್ಯವಾಗಿರುವುದರಿದ ಹಾಗೂ ಚಿತ್ರೀಕರಣಕ್ಕಾಗಿ ಖರ್ಚು-ವೆಚ್ಚುಗಳಲ್ಲಿಯೂ ಸಹ ಉಳಿತಯವಾಗುದುವುದು.
ವಿಕೇ೦ದ್ರಿಕರಣದ ದ್ರಿಷ್ಟಿಕೊನದಿಂದಾಗಿ ಕನ್ನಡ ಚಲನಚಿತ್ರೋದ್ಯಮದ ಉನ್ನತಿಗಾಗಿ, ರಚನಾತ್ಮಕ ಚಟುವಟಿಕೆಗಳನ್ನು ಒಳಗೊಂಡು ಎಲ್ಲ ರಂಗವನ್ನು ಉಳಿಸಿ-ಬೆಳಿಸಿ ಪ್ರೋತ್ಸಾಹಿಸುವ ದ್ರಿಷ್ಟಿಯಿಂದ ಉತ್ತರ ಕರ್ನಾಟಕ ಚಲನಚಿತ್ರ ಮಂಡಳಿ ಸ್ಥಾಪಿಸಿ ಈಗ ಸಮಾಜಕ್ಕೆ ಉತ್ತಮವಾದ ಚಲನಚಿತ್ರಗಳನ್ನು ಕೊಡುವ ನಿಟ್ಟಿನಲ್ಲಿ ಈ ಮಂಡಳಿ ತೊಡಗಿಸಿಕೊಂಡಿದೆ.
ಧನ್ಯವಾದಗಳೊಂದಿಗೆ,ಇಂತಿ ನಿಮ್ಮ ವಿಶ್ವಾಸಿ,